Friday, March 13, 2026
Flats for sale
Homeಜಿಲ್ಲೆಪುತ್ತೂರು ; ಒಂದೂವರೆ ತಿಂಗಳ ಹಿಂದೆಯಷ್ಟೇ ಮದುವೆಯಾದ ನವವಿವಾಹಿತೆ ನೇಣಿಗೆ ಶರಣು.

ಪುತ್ತೂರು ; ಒಂದೂವರೆ ತಿಂಗಳ ಹಿಂದೆಯಷ್ಟೇ ಮದುವೆಯಾದ ನವವಿವಾಹಿತೆ ನೇಣಿಗೆ ಶರಣು.

ಪುತ್ತೂರು: ನವ ವಿವಾಹಿತೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ 4 ರಂದು   ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ  ಕುರಿಯದಲ್ಲಿ ನಡೆದಿದೆ.  ಕುರಿಯ ಗ್ರಾಮದ ಗಡಾಜೆ ರೋಹಿತ್ ಎಂಬವರ ಪತ್ನಿ ಶೋಭಾ(24ವ.) ಆತ್ಮಹತ್ಯೆಗೆ ಶರಣಾದವರು . ಈಕೆಯ ವಿವಾಹ ಒಂದೂವರೆ ತಿಂಗಳ ಹಿಂದೆಯಷ್ಟೇ ನಡೆದಿತ್ತು. ಕಳೆದ ಡಿ.21ರಂದು ರೋಹಿತ್‌ ಹಾಗೂ ಶೋಭಾ ವಿವಾಹ ನಡೆದಿತ್ತು.

ಶೋಭಾ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರಿ. ಅವರ ಪತಿ ರೋಹಿತ್ ಅವರು ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ಬ್ಯಾಟರಿ, ಇನ್ವರ್ಟರ್ ಮಳಿಗೆಯೊಂದನ್ನು ಹೊಂದಿದ್ದಾರೆ. ಫೆ.4ರಂದು ರೋಹಿತ್ ಅವರ ಮನೆಯ ಮೇಲ್ಛಾವಣಿ (ಅಟ್ಟ) ಯಲ್ಲಿ ಶೋಭಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಶೋಭಾ ಅವರ ಅಕ್ಕ ಬೆಳಂದೂರು ಗ್ರಾಮದ ಕುದ್ದಾರು ನಯನ ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. 174(3)(i), 174(3)(iv) CRPC ಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಅಸಹಜ ಸಾವಿನ ತನಿಖೆ ನಡೆಸುತ್ತಿದ್ದಾರೆ.

ರೋಹಿತ್‌ ಅವರದು ಕೂಡು ಕುಟುಂಬ.  ತಂದೆ, ತಾಯಿ ಮತ್ತು ಇಬ್ಬರು ಅಣ್ಣಂದಿರು,  ಅತ್ತಿಗೆಯಂದಿರ ಜತೆ ರೋಹಿತ್ ದಂಪತಿಗಳು ವಾಸಿಸುತ್ತಿದ್ದರು. ಆದರೇ ಘಟನೆ ನಡೆದ ಫೆ 4 ರಂದು ಬೆಳಿಗ್ಗೆ ಗಡಾಜೆ ಮನೆಯಲ್ಲಿ ಶೋಭಾ ಮತ್ತವರ ಅತ್ತೆ ಪಾರ್ವತಿಯವರು ಮಾತ್ರ ಇದ್ದರು ಎನ್ನಲಾಗಿದೆ. ಅಂದು ಬೆಳಿಗ್ಗೆ ಶೋಭಾ ಫೋನಿಗೆ ಕರೆಯೊಂದು ಬಂದಿದ್ದು, ಆಕೆ ಕರೆ ಸ್ವೀಕರಿಸಲು ಬಾರದಿದ್ದಾಗ ಅತ್ತೆ ಪಾರ್ವತಿ ಸೊಸೆಗಾಗಿ ಹುಡುಕಾಡಿದ್ದಾರೆ. ಮನೆಯೊಳಗಡೆ ಅಥಾವ ಸುತ್ತಾಮುತ್ತಾ ಎಲ್ಲಿಯೂ ಕಾಣಿಸದಿದ್ದಾಗ   ಮನೆಯ ಅಟ್ಟಕ್ಕೆ ಹೋಗಿ ನೋಡಿದ್ದು,  ಅಲ್ಲಿ ಶೋಭಾರವರು ನೇಣು ಬಿಗಿದುಕೊಂಡಿರುವುದು ಕಾಣಿಸಿದೆ. ತಕ್ಷಣ ಅವರನ್ನು ಆಸ್ಫತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕೃತ್ಯ ನಡೆದ ದಿನ   ವಿಠಲ ಶೆಟ್ಟಿ ಎಂಬವರ ಮನೆಯಲ್ಲಿ ನಾಗತಂಬಿಲ ಕಾರ್ಯಕ್ರಮವಿದ್ದು ರೋಹಿತ್ ಮತ್ತವರ ತಂದೆ ಪುರುಷೋತ್ತಮ ಗೌಡರು ಅದರಲ್ಲಿ ಭಾಗವಹಿಸಲು  ಹೋಗಿದ್ದರು ಎನ್ನಲಾಗಿದೆ. ರೋಹಿತ್ ಅವರ ಅಣ್ಣಂದಿರು ಮತ್ತು ಅತ್ತಿಗೆಯಂದಿರು ಅತ್ತಿಗೆಯಂದಿರ ಮನೆಗೆ ಹೋಗಿದ್ದರು. ಹೀಗಾಗಿ ಶೋಭಾರವರು ಆತ್ಮಹತ್ಯೆಗೆ ಶರಣಾದ ವೇಳೆ ಮನೆಯಲ್ಲಿ ಅತ್ತೆ ಹೊರತು ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular