ಪುತ್ತೂರು : ‘ಆರು ತಿಂಗಳ ಬಳಿಕ ಸಿಎಂ ಆಗಿ ಬಂದು ಡಿ.ಕೆ.ಶಿವಕುಮಾರ್ ಪುತ್ತೂರು ಕಾಂಗ್ರೆಸ್ ಭವನ ಉದ್ಘಾಟನೆ ಮಾಡಲಿ’ ಎಂದು ಕೈ ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನ ಕಾಂಗ್ರೆಸ್ ಕಚೇರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೋಟಕ ಭಾಷಣ ಮಾಡಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಇದ್ದ ವೇದಿಕೆಯಲ್ಲೇ ಶಾಸಕ ಆಶೋಕ್ ರೈ ಗೆ ಹೇಳಿದ್ದಾರೆ.
ಶಿಲಾನ್ಯಾಸ ಇಂದು ಮಾಡಿದ್ದೀರಿ, ಇನ್ನು 6 ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿಯುತ್ತದೆ ಆಗ ಸಿಎಂ ಆಗಿ ಬಂದು ನೀವೆ ಉದ್ಘಾಟನೆ ಮಾಡುತ್ತೀರ ಎಂದು ಹೇಳಿದ್ದಾರೆ.ಈ ನಡುವೆ ರಾಜಕೀಯದಲ್ಲಿ ಸಿ ಎಂ ಬದಲಾವಣೆಯ ಚರ್ಚೆ ನಡೆಯುತ್ತಿದ್ದು ಶಾಸಕ ಅಶೋಕ್ ಕುಮಾರ್ ರೈಯವರ ಹೇಳಿಕೆ ಸಂಚಲನ ಉಂಟು ಮಾಡಿದೆ.


