ನವದೆಹಲಿ : ಆಂಟಿಬಯೋಟಿಕ್(ರೋಗನಿರೋಧ ಔಷಧ)ಗಳ ಅತಿಯಾದ ಬಳಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇಂಥ ಔಷಧಗಳು ರಕ್ತ ಹೀನತೆ, ಮೂತ್ರರೋಗದಂತಹ ರೋಗಗಳನ್ನು ಗುಣಪಡಿಸುವಷ್ಟು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದನ್ನು ಐಸಿಎಂಆರ್ ಅಧ್ಯಯನ ವರದಿ ಉಲ್ಲೇಖಿಸಿದೆ. ಆದ್ದರಿಂದ ಆಂಟಿಬಯೋಟಿಕ್ಗಳ ಅತಿಯಾದ ಸೇವನೆ ಕಳವಳಕಾರಿ ಸಂಗತಿ ಎಂದು ಪ್ರಧಾನಿ ವರ್ಷದ ಕೊನೆಯ ಮನ್ ಕಿ
ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇದೇ ವೇಳೆ ೨೦೨೫-ಭಾರತದ ಪಾಲಿಗೆ ಹೆಮ್ಮೆಯ ಸಾಧನೆಗಳ ವರ್ಷ. ರಾಷ್ಟಿçÃಯ ಭದ್ರತೆ, ಕ್ರೀಡೆ, ವೈಜ್ಞಾನಿಕ ಸಂಶೋಧನೆಯAತಹ ಕ್ಷೇತ್ರಗಳಲ್ಲಿ ಭಾರತದ ಮಹತ್ತರ ಸಾಧನೆಯ ಪರಿಣಾಮ ಈಗ ಎಲ್ಲೆಡೆ ಗೋಚರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಭದ್ರತಾ ನೆಲೆಗಳು ಹಾಗೂ ಭಯೋತ್ಪಾದಕರ ಅಡಗುದಾಣಗಳನ್ನು ನಾಶ ಮಾಡಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು ವಿವರಿಸಿದರು.


