ತುಮಕೂರು : ಮೈಕ್ರೋ ಫೈನಾನ್ಸ್ನ ಸಿಬ್ಬಂದಿಯಿಂದ ಸಾಲ ಕಟ್ಟುವಂತೆ ಕಿರುಕುಳ ನೀಡಿದ ಹಿನ್ನೆಲೆ ಮನನೊಂದ ಮಹಿಳೆ, ವೀಡಿಯೋ ಮಾಡಿಟ್ಟು ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾಧಿಕ ಬೇಗಂ (42) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಸಾಧಿಕ ಬೇಗಂ, ತಿಪಟೂರಿನ ಗಾಂಧಿ ನಗರದ ಬೋವಿ ಕಾಲೋನಿಯ ನಿವಾಸಿಯಾಗಿದ್ದು ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಮೈಕ್ರೋ ಫೈನಾನ್ಸ್ನ ಸಿಬ್ಬಂದಿ ಸಾಲ ಕಟ್ಟುವಂತೆ ಹೆಚ್ಚು ಒತ್ತಡ ಹಾಕಿದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸಿಬ್ಬಂದಿಗಳ ಕಿರುಕುಳದ ಈ ಬಗ್ಗೆ ಹಾಸನದಲ್ಲಿ ಕೆಲಸ ಮಾಡ್ತಿದ್ದ ತನ್ನ ಪತಿ ಸಯಿದಾ ನಯಾಜ್ ಬಳಿ ಹೇಳಿಕೊಂಡಿದ್ದು ಪತಿ ಕೂಡ ತನ್ನ ಹೆಂಡ್ತಿಗೆ ಧೈರ್ಯವಾಗಿ ಇರು, ಬಂದು ಸಾಲವನ್ನು ಕಟ್ಟುತ್ತೇನೆ ಅಂತಾ ಹೇಳಿದ್ದನು ಆದರೆ ಕಳೆದ ಸೋಮವಾರ ಮೈಕ್ರೋ ಫೈನಾನ್ಸ್ನ ಸಿಬ್ಬಂದಿಯಿಂದ ಒತ್ತಡ ಹೆಚ್ಚಾದ ಕಾರಣ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವರಲ್ಲಿ ಕ್ಷಮೆಯಾಚಿಸಿ, ಪತಿ ಹಾಗೂ ಮಕ್ಕಳು ಚೆನ್ನಾಗಿ ನೋಡಿಕೊಂಡ್ರು ಎಂದು ವೀಡಿಯೋದಲ್ಲಿ ಹೇಳಿದ್ದು ಮನೆಗೆ ಬಂದ ಪತಿ ತನ್ನ ಪತ್ನಿ ಕಾಣದಿದ್ದಕ್ಕೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಹುಡುಕಾಟ ನಡೆಸಿದ ಪೊಲೀಸರಿಗೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಬಳಿಯ ಕಲ್ಲುಶೆಟ್ಟಿಹಳ್ಳಿ ಬಳಿ ಶವ ಪತ್ತೆ ಪತ್ತೆಯಾಗಿದೆ ಈ ಸಂಬಂಧ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.