Friday, March 13, 2026
Flats for sale
Homeದೇಶಜೈಪುರ ; ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿಯವರನ್ನು ಶೂಟ್ ಮಾಡಿದ ದುಷ್ಕರ್ಮಿಗಳು.

ಜೈಪುರ ; ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿಯವರನ್ನು ಶೂಟ್ ಮಾಡಿದ ದುಷ್ಕರ್ಮಿಗಳು.

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಹಾಡಹಗಲೇ ರಾಷ್ಟಿçÃಯ ರಜಪೂತ ಕರಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಾಮೆಡಿ ಅವರನ್ನು ಮಂಗಳವಾರ ಮಧ್ಯಾಹ್ನ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಜೈಪುರದ ಶ್ಯಾಮನಗರದಲ್ಲಿರುವ ಸುಖದೇವ್ ಸಿಂಗ್ ಅವರ ಕಚೇರಿಗೆ ಮಧ್ಯಾಹ್ನ ೧.೦೫ರ ಹೊತ್ತಿಗೆ ದುಷ್ಕರ್ಮಿಗಳು ಆಗಮಿಸಿದ್ದಾರೆ. ಹತ್ತು ನಿಮಿಷಗಳ ಕಾಲ ಅವರೊಂದಿಗೆ ಚರ್ಚಿಸಿ, ೧.೨೧ರ ಹೊತ್ತಿಗೆ ಪಿಸ್ತೂಲು ತೆಗೆದು ಗುಂಡು ಚಲಾಯಿಸಿದ್ದಾರೆ. ಒಟ್ಟು ೧೭ ಸುತ್ತು ಗುಂಡು ಹಾರಿಸಿದ್ದು, ಆ ಪೈಕಿ ೪ ಗುಂಡುಗಳು ಗೊಗಾಮೆಡಿ ಅವರ ಶರೀರ ಹೊಕ್ಕಿದೆ.

ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸಮೀಪದ ಮೆಟ್ರೋ ಮಾಸ್ ಆಸ್ಪತ್ರೆಗೆ
ಕರೆದೊಯ್ಯಲಾಯಿತು. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ರಜಪೂತ
ನಾಯಕನ ಭದ್ರತಾ ಸಿಬ್ಬಂದಿಯ ಮೇಲೂ ಗುಂಡು ಹಾರಿಸಲಾಗಿದೆ.

ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರು ಏಕಾಏಕಿ ಪಿಸ್ತೂಲು ತೆಗೆದು ಗುಂಡು ಹಾರಿಸಿರುವುದು ದಾಖಲಾಗಿದೆ. ಮೊದಲ ಗುಂಡು ಗೊಗಾಮೆಡಿ ಅವರ ಎದೆಗೆ ಬಿದ್ದಿದೆ.
ಗುಂಡೇಟು ತಿಂದು ನೆಲದ ಮೇಲೆ ಬಿದ್ದ ನಂತರವೂ ಅವರ ಮೇಲೆ ಕೆಲ ಸುತ್ತು ಗುಂಡು ಹಾರಿಸಲಾಗಿದೆ.

ಗೊಗಾಮೆಡಿ ಅವರನ್ನು ಭೇಟಿಯಾಗಲು ಬಂದಿದ್ದವರ ಪೈಕಿ ನವೀನ್‌ಸಿಂಗ್ ಶೆಖಾವತ್ ಎನ್ನುವವರೂ ಇದ್ದರು. ಯಾವಾಗ ಉಳಿದಿಬ್ಬರು ಪಿಸ್ತೂಲು ಹೊರತೆಗೆದರೋ, ಆಗ ಅವರನ್ನು
ನವೀನ್ ಸಿಂಗ್ ತಡೆಯಲು ಹೋದರು. ಅವರ ಮೇಲೂ ಗುಂಡು ಹಾರಿಸಿದ್ದು, ಅವರೂ ಸತ್ತಿದ್ದಾರೆ. ನವೀನ್ ಸಿಂಗ್, ಹತ್ಯೆಗೀಡಾದ ಕರಣಿ ಸೇನಾ ನಾಯಕನ ಸಹಚರನಾಗಿದ್ದ.
ಅವನ ಮೂಲಕ ಹಂತಕರು ಒಳಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂತಕರು ನವೀನ್ ಸಿಂಗ್ ಅವರ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದರು. ಕೃತ್ಯ ನಡೆದ ನಂತರ ರಸ್ತೆಗೆ ಬಂದು ಅಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿ, ಅದನ್ನು ಕಸಿದು ಕೊಂಡು ಅದರಲ್ಲಿ ಪರಾರಿಯಾಗಿದ್ದಾರೆ.

ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯನ್ನು ಏಕೆ ರಚಿಸಲಾಯಿತು?

ಶ್ರೀ ರಜಪೂತ ಕರ್ಣಿ ಸೇನೆಯನ್ನು 2006 ರಲ್ಲಿ ದಿವಂಗತ ಲೋಕೇಂದ್ರ ಸಿಂಗ್ ಕಲ್ವಿ ಸ್ಥಾಪಿಸಿದರು. ಗೊಗಮೇಡಿ ಅವರು ಒಮ್ಮೆ ಕಲ್ವಿಗೆ ನಿಕಟರಾಗಿದ್ದರು ಮತ್ತು ಕರ್ಣಿ ಸೇನೆಯ ರಾಜ್ಯಾಧ್ಯಕ್ಷರಾಗಿದ್ದರು, ಆದರೆ 2015 ರಲ್ಲಿ ಕಾಲ್ವಿಯಿಂದ ಎಸ್‌ಆರ್‌ಕೆಎಸ್‌ನಿಂದ ಹೊರಹಾಕಲ್ಪಟ್ಟಿದ್ದರು.

ಕಳೆದ ಕೆಲವು ವರ್ಷಗಳಿಂದ, SRRKS ಪ್ರಾಮುಖ್ಯತೆಯನ್ನು ಗಳಿಸಿತ್ತು ಆಗಾಗ್ಗೆ ವಿವಿಧ ವಿಷಯಗಳಿಗೆ ಹಿಂಸಾತ್ಮಕ ವಿರೋಧದ ಮೂಲಕ. ಬಾಲಿವುಡ್ ಸಿನಿಮಾ ‘ಪದ್ಮಾವತ್’ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇದು ವಿಶೇಷವಾಗಿ ಸುದ್ದಿಯಾಗಿತ್ತು. 2017 ರ ಜನವರಿಯಲ್ಲಿ ಜೈಪುರದ ಜೈಗಢ್ ಕೋಟೆಯಲ್ಲಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ SRRKS ಹಲ್ಲೆ ನಡೆಸಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular