ಗೋಕಾಕ : ಗೋಕಾಕದಿಂದ ಹೊಸೂರಗೆ ತೆರಳುತಿದ್ದ ಕಾರವೊಂದು ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆಗೆ ನುಗ್ಗಿ ಪಲ್ಟಿಯಾಗಿ ಕಾರು ನುಜ್ಜು ನೂರಾಗಿದೆ.
ನಿನ್ನೆ ರಾತ್ರಿ ಗೋಕಾಕದಿಂದ ಗೋಡಗೇರಿಗೆ ತೆರಳುವ ಮದ್ಯ ಕೊಣ್ಣೂರ ಹೊರವಲಯದ ಕರೆಮ್ಮನ ದೇವಸ್ಥಾನದ ಹತ್ತಿರ ರಸ್ತೆ ತಿರುವು ಇರುವುದನ್ನು ಗಮನಿಸದೆ ವೇಗವಾಗಿ ಚಲಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರಣ ರಸ್ತೆ ಪಕ್ಕದಲ್ಲಿರುವ ಕಬ್ಬಿನ ಗದ್ದೆಗೆ ನುಗ್ಗಿದ ಪರಿಣಾಮ ಪಲ್ಟಿಯಾಗಿ ಚಾಲಕ ಮತ್ತು ಇನ್ನೊರ್ವನಿಗೆ ಗಾಯಗೊಂಡಿದ್ದಾರೆ.
ಅದೃಷ್ಟವಶಾತ ಕಾರಿನಲ್ಲಿದ್ದ ಚಾಲಕ ಮತ್ತು ಇನ್ನೊರ್ವ ಪ್ರಾಣಾಪಾಯದಿಂದ ಪಾರಾಗಿದ್ದು ಗೋಕಾಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ದಾಖಲಾಗಿಸಿದ್ದಾರೆ.


