Sunday, March 15, 2026
Flats for sale
Homeರಾಜ್ಯಗಂಗಾವತಿ : ಕನಕದಾಸರ ಭಾವಚಿತ್ರಕ್ಕೆ ಅಪಮಾನ ಕುರುಬರ ಸಂಘದಿಂದ ಪ್ರತಿಭಟನೆ.

ಗಂಗಾವತಿ : ಕನಕದಾಸರ ಭಾವಚಿತ್ರಕ್ಕೆ ಅಪಮಾನ ಕುರುಬರ ಸಂಘದಿಂದ ಪ್ರತಿಭಟನೆ.

ಗಂಗಾವತಿ : ಕನಕದಾಸರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರದ ಪ್ಲೆಕ್ಸ್ಗಳನ್ನು ಹರಿದು ವಿಕೃತಿ ಮೆರೆದ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದಲ್ಲಿ ಶುಕ್ರವಾರ ತಾಲ್ಲೂಕು ಕುರುಬರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಕನಕಗಿರಿ ರಸ್ತೆಯಲ್ಲಿರುವ ಕನಕದಾಸ ಸಮುದಾಯ ಭವನದಿಂದ ಬೈಕ್ ರ್ಯಾಲಿ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚರಿಸಿ ಕೇಂದ್ರ ಬಸ್ ನಿಲ್ದಾಣದ ಮುಂದಿರುವ ಶ್ರೀಕೃಷ್ಣದೇವರಾಯ ವೃತ್ತಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ಬಳಿಕ ಕಂದಾಯ ಇಲಾಖೆಯ ಮೂಲಕ ಸಕರ್ಾರಕ್ಕೆ ಮನವಿ ಸಲ್ಲಿಸಿದ ಪ್ರಮುಖರು, ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜ ವಿವಾದ ಸಂದರ್ಭದಲ್ಲಿ ವಿನಾಃಕಾರಣ ಕನಕದಾಸರು ಹಾಗೂ ಸಿಎಂ ಸಿದ್ದರಾಮಯ್ಯ ಇರುವ ಫ್ಲೆಕ್ಸ್ ಹರಿದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.

ಅಲ್ಲದೇ ಮಂಡ್ಯದಲ್ಲಿರುವ ಕುರುಬರ ಸಮಾಜದ ಹಾಸ್ಟಲ್ ಮೇಲೆ ಕಲ್ಲೆಸೆದು ಕಿಟಕಿಯ ಗಾಜುಗಳನ್ನು ಪುಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಏನಾದರೂ ದ್ವೇಷ ಇದ್ದರೆ ಅದು ವೈಯಕ್ತಿಕವಾಗಿ ವಿರೋಧಿಸಬೇಕು. ಅದು ಬಿಟ್ಟು ಇಡೀ ಸಮುದಾಯಕ್ಕೆ ನೋವಾಗುವ ರೀತಿಯಲ್ಲಿ ಪುಂಡರು ನಡೆದುಕೊಂಡಿದ್ದರು ಸರಿಯಲ್ಲ ಎಂದು ಆಕ್ಷೇಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular