ಕೊಚ್ಚಿ : ಆಲಪ್ಪುಳದ ಥಂಪೋಲಿ ಮೂಲದ ಅವನಿ ಎಂಬ ಯುವತಿಗೆ ಇಂದು ಮದುವೆ ನಡೆಯಬೇಕಿತ್ತು ಆದರೆ ಬೆಳಗ್ಗಿನ ಮೇಕಪ್ ಗಾಗಿ ಹೊರಟ ವಧುವಿಗೆ ಅಪಘಾತವಾದ ಘಟನೆ ನಡೆದಿದೆ.
ಬೆಳಿಗ್ಗೆ ಸಂಭ್ರಮದಿಂದ ಆರಂಭವಾದದ್ದು, ವಧು ಊಹಿಸಲೂ ಸಾಧ್ಯವಿಲ್ಲದಷ್ಟು ಕಠಿಣ ಪರೀಕ್ಷೆಗೆ ಒಳಗಾಗಿದ್ದಾಳೆ. ಶುಕ್ರವಾರ ಮುಂಜಾನೆ ಮನೆಯಿಂದ ಹೊರಟು, ಮದುವೆಗೆ ದೇವಸ್ಥಾನಕ್ಕೆ ಹೋಗುವ ಮೊದಲು ತನ್ನ ವಧುವಿನ ಮೇಕಪ್ ಮಾಡಿಕೊಳ್ಳಲು ಉತ್ಸುಕಳಾಗಿದ್ದಳು. ಆ ವೇಳೆ ಅವನಿ ಮತ್ತು ಅವಳ ಭಾವನೊಂದಿಗಿನ ಸಂಚರಿಸುವ ವೇಳೆ ಅಪಘಾತವಾಗಿದೆ .
ಆರಂಭದಲ್ಲಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು, ನಂತರ ಹೆಚ್ಚಿನ ಚಿತಿತ್ಸೆಗಾಗಿ ಕೊಚ್ಚಿಯ ವಿಪಿಎಸ್ ಲೇಕ್ಶೋರ್ ಆಸ್ಪತ್ರೆಗೆ ಕರೆದೊಯ್ಯಲಾಯಿತಗೆ. ಬೆನ್ನುಮೂಳೆಯ ಗಾಯದಿಂದ ತೀವ್ರವಾದ ನೋವಿನ ಹೊರತಾಗಿಯೂ, ಅವನಿ ಮತ್ತು ವರ ಶರೋನ್ ದೃಢನಿಶ್ಚಯದಿಂದ ಅದೇ ಮುಹೂರ್ತದಲ್ಲಿ ಆಸ್ಪತ್ರೆಯಲ್ಲಿ ಮದುವೆಯಾಗಿದ್ದಾರೆ.
ಬಳಿಕ ಆಸ್ಪತ್ರೆಯೊಳಗೆ ಅಪರೂಪದ, ಆಳವಾದ ಭಾವನಾತ್ಮಕ ಕ್ಷಣ ನಡೆದಿದೆ. ತುರ್ತು ನಿಗಾ ಘಟಕದಲ್ಲಿ ಅವನಿ ಹಾಸಿಗೆಯ ಮೇಲೆ ಮಲಗಿದ್ದಾಗ, ಶರೋನ್ ಆಕೆಯ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ.ಈ ವೇಳೆ ಆಪ್ತ ಕುಟುಂಬ ಸದಸ್ಯರು ಸಾಕ್ಷಿಗಳಾಗಿ ನಿಂತಿದ್ದರು
ಅವರ ಮದುವೆಯ ಮುಹೂರ್ತ ಮಧ್ಯಾಹ್ನ 12:15 ರಿಂದ 12:30 ರ ನಡುವೆ ನಿಗದಿಪಡಿಸಲಾಗಿತ್ತು. ವರನ ಕುಟುಂಬವು ಆಸ್ಪತ್ರೆಯಲ್ಲಿ ಸಮಾರಂಭವನ್ನು ನಡೆಸಬೇಕೆಂದು ವಿನಂತಿಸಿದ್ದು. ಆಡಳಿತ ಮಂಡಳಿಯ ಅನುಮತಿಯೊಂದಿಗೆ, ನಾವು ಇಲ್ಲಿ ಮದುವೆಯನ್ನು ಏರ್ಪಡಿಸಿದ್ದೇವೆ, ”ಎಂದು ವಿಪಿಎಸ್ ಲೇಕ್ಶೋರ್ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.
ಸಮಾರಂಭ ಮುಗಿದ ಕೂಡಲೇ, ಅವನಿಯನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ವಿಪಿಎಸ್ ಲೇಕ್ಶೋರ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧೀಶ್ ಕರುಣಾಕರನ್ ಅವರ ಆರೈಕೆಯಲ್ಲಿ ಅವರು ಶನಿವಾರ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ನಡೆಯಿತು.
ಏತನ್ಮಧ್ಯೆ, ಆಲಪ್ಪುಳದಲ್ಲಿರುವ ವಿವಾಹ ಸ್ಥಳಕ್ಕೆ ಆಗಮಿಸಿದ ಅತಿಥಿಗಳುಮೊದಲೇ ಯೋಜಿಸಿದಂತೆ ಮದುವೆ ಮಂಟಪದಲ್ಲಿ ತಯಾರಿಯಾಗಿದ್ದ ಭರ್ಜರಿ ಊಟವನ್ನು ಸವೆದಿದ್ದಾರೆ.


