ಕಲಬುರ್ಗಿ : ಕೋರ್ಟ್ ನ ಆವರಣದಲ್ಲಿ ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶ ಸಾವನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ..
ವಿಶ್ವನಾಥ್ ವಿ ಮೂಗತಿ 44 ಸಾವನ್ನಪ್ಪಿರುವ ನ್ಯಾಯಾಧೀಶರು.
ಕಲಬುರ್ಗಿ ಜಿಲ್ಲಾ 3ನೆ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿದ್ದ ಅವರು ಕಳೆದ ವಾರವೇ ಕಲಬುರ್ಗಿಗೆ ವರ್ಗಾವಣೆಯಾಗಿ ಬಂದಿದ್ದರು ಇಂದು ಬೆಳಗ್ಗೆ ಎಂದಿನಂತೆ ಕೋರ್ಟ್ಗೆ ನ್ಯಾಯಾಧೀಶರು ಬಂದಿದ್ದು ಕೋರ್ಟ್ ಹಾಲ್ ಗೆ ಬರುವುದಕ್ಕಿಂತ ಮುಂಚೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದರು ಆಸ್ಪತ್ರೆ ದಾಖಲಾಗುವ ಮುನ್ನವೇ ಕೊನೆಯ ಉಸಿರೆಳೆಡಿದ್ದಾರೆಂದು ತಿಳಿದುಬಂದಿದೆ.


